Thursday, 4 October 2012

ಹೆಸರಾಯಿತು ಕರ್ನಾಟಕ - ಉಸಿರಾಗಲಿ ಕನ್ನಡ

ಪುಕ್ಕಟೆಯಾಗಿ ಸಿಗಲಿಲ್ಲ ನಮಗೆ ನಮ್ಮಯ ಕರುನಾಡು : ಕರ್ನಾಟಕದ ಏಕೀಕರಣ

ಪುಕ್ಕಟೆಯಾಗಿ ಸಿಗಲಿಲ್ಲ ನಮಗೆ ನಮ್ಮಯ ಕರುನಾಡು ಕಾರಣ ಐದು ಭಾಗಗಳಾಗಿ ಹರಿದು ಹಂಚಿ ಹೋದ ಕರ್ನಾಟಕವನ್ನು (ಮೈಸೂರು ಸಂಸ್ಥಾನ, ಮದ್ರಾಸು, ಬಾಂಬೆ, ಹೈದರಾಬಾದ್ ಹೀಗೆ ನಾಲ್ಕು ಬಾಗಗಳಲ್ಲಿ ಬ್ರಿಟಿಷರ ಅಡಿನದಲ್ಲಿ ರಾಜಮನೆತನಗಳು ಹಾಗೂ ಕೊಡಗು ಪ್ರದೇಶದಲ್ಲಿ ಬ್ರಿಟಿಷರ ನೇರ ಆಳ್ವಿಕೆ) ಒಂದು ಮಾಡಿ ಈ "ವಿಶಾಲ ಕರ್ನಾಟಕ"ವನ್ನು ಕನ್ನಡಿಗರಿಗಾಗಿ ಸಮರ್ಪಿಸಿದರು. ನಮ್ಮ ಕರ್ನಾಟಕದ ಏಕೀಕರಣದ ಸಂಗ್ರಾಮ ಹಲವು ದಶಕಗಳ ಕಾಲ ನಡೆಯಿತು. ಈ ಸಂಗ್ರಾಮದ ಬಹು ಮುಖ್ಯವಾದ ವ್ಯಕ್ತಿ. "ಆಲೂರು ವೆಂಕಟರಾಯರು" ಇವರನ್ನು ಕನ್ನಡಿಗರು ಬಹು ಪ್ರೀತಿಯಿಂದ "ಕನ್ನಡ ಕುಲ ಪುರೋಹಿತ"ರು ಎಂದು ಕರೆಯುತ್ತಾರೆ. ಇವರ ಕಾಲಮಾನ ಕ್ರಿ.ಶ. ೧೨ ಜುಲೈ ೧೮೮೦ ರಿಂದ ಕ್ರಿ.ಶ. ೨೫ ಫೆಬ್ರವರಿ ೧೯೬೪ ವರೆಗೆ. ವೆಂಕಟರಾಯರ ತಂದೆ "ಭೀಮ ರಾವ್" ಮತ್ತು ತಾಯಿ "ಭಾಗೀರಥಿ ಭಾಯಿ"



ಹರಿದು ಹಂಚಿಹೋದ ಕರ್ನಾಟಕದ ಭೂಪ್ರದೇಶಗಳು.

೧) ಮೈಸೂರು ಒಡೆಯರ ಆಳ್ವಿಕೆಗೆ ಒಂಬತ್ತು ಜಿಲ್ಲೆಗಳು.
೨) ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಸಂಸ್ಥಾನಕ್ಕೆ.
೩) ಬೀದರ್ ಗುಲ್ಬರ್ಗ ಮತ್ತು ರಾಯಚೂರು ಈ ಮೂರು ಜಿಲ್ಲೆಗಳು ಹೈದಾರಬಾದಿನ ನವಾಬರ ಅದೀನಕ್ಕೆ.
೪) ಕೊಡಗನ್ನು ನೇರವಾಗಿ ಬ್ರಿಟಿಷರೆ ತಮ್ಮ ಅದೀನಕ್ಕೆ ತೆಗೆದುಕೊಂಡರು.
೫) ದಾರವಾಡ, ಉತ್ತರ ಕನ್ನಡ, ಬಿಜಾಪುರ ಮತ್ತು ಬೆಳಗಾವಿ ಈ ನಾಲ್ಕು ಜಿಲ್ಲೆಗಳು ಬಂಬಾಯಿಯ ಸಂಸ್ಥಾನಕ್ಕೆ.



ಮಹಾರಾಷ್ಟ್ರದ ಜನತೆ "ಬಾಲಗಂಗಾಧರ ತಿಲಕ" ರನ್ನು ಹೇಗೆ ಸ್ಮರಿಸುತಾರೋ ಹಾಗೆ ನಮ್ಮ ಕನ್ನಡಿಗರು "ಆಲೂರು ವೆಂಕಟರಾಯರನ್ನು" ಸ್ಮರಿಸಬೇಕು.
ಕರ್ನಾಟಕದ ಏಕೀಕರಣದಿಂದ ಮಾತ್ರ ಸಾಧ್ಯವಾಗುವುದು "ಕನ್ನಡಿಗರಿಗಾಗಿ ಪ್ರತ್ಯೇಕ ರಾಜ್ಯ", ಇದಕ್ಕಾಗಿ ೧೮೫೬ರಲ್ಲಿ ಕನ್ನಡಿಗರ ಮೊದಲ ಹೆಜ್ಜೆ ಮತ್ತು ೧೮೯೦ ರಲ್ಲಿ " ಕರ್ನಾಟಕ ವಿಧ್ಯಾವರ್ಧಕ ಸಂಘ" ಸ್ಥಾಪನೆಯಾಯಿತು, ಆಲೂರು ವೆಂಕಟರಾಯರು ಈ ಚಳುವಳಿಗೆ ದುಮುಕಿದ ನಂತರ ಕರ್ನಾಟಕದ ಏಕೀಕರಣದ ಸ್ವರೂಪವೇ ಬದಲಾಯಿತು. ೧೯೧೭ರಲ್ಲಿ ವೆಂಕಟರಾಯರು ಹೊರ ತಂದ "ಕರ್ನಾಟಕ ಗತ ವೈಭವ" ( ಬ್ರಿಟಿಷರ ಆಕ್ರಮಣದ ಹಿಂದಿನ ದಿನಗಳ ಕನ್ನಡಿಗರ ಚರಿತೆಯ ಕುರಿತಾದ ಪುಸ್ತಕ) ಎನುವ ಪುಸ್ತಕವು ಕನ್ನಡಿಗರ ಮೇಲೆ ಹೆಚ್ಚು ಪ್ರಭಾವ ಬೀರಿತು. ಮತ್ತು ಏಕೀಕರಣಕ್ಕೆ ಕನ್ನಡಿಗರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.

ಕರ್ನಾಟಕ ಗತ ವೈಭವ : ಈ ಪುಸ್ತಕವನ್ನು ಬರೆಯಲು ೧೩ ವರ್ಷಗಳ ಕಾಲ ಸಮಯ ವ್ಯಯಿಸಬೇಕಾಯಿತು, ಕನ್ನಡದ ಶಿಲಾಶಾಸನಗಳು, ನಾಣ್ಯಗಳು ಮತ್ತು ಪುರಾತನ ಸ್ಮಾರಕಗಳ ಮುಖಾಂತರ ಮಾಹಿತಿ ಸಂಗ್ರಹಿಸಿ, ಈಪುಸ್ತಕವನ್ನು ಹೊರತಂದರು. ಇದೆ ಪುಸ್ತಕ ೨೦೦೭ರಲ್ಲಿ ತನ್ನ ೯೦ ವರ್ಷಗಳನ್ನು ಪೂರೈಸಿತು.

ಆನಂತರ ವೆಂಕಟರಾಯರು ಬರೆಯುವುದನ್ನು ಮುಂದುವರೆಸಿದರು, ಅನೇಕ ಶಾಲೆಗಳನ್ನು ಮತ್ತು ಗ್ರಂಥಾಲಯಗಳನ್ನು ಸ್ಥಾಪಿಸಿದರು, ನಿರಂತರ ೫೦ ವರ್ಷಗಳ ಹೋರಾಟದ ನಂತರ ೧೯೫೬ರಲ್ಲಿ ಕನ್ನಡಿಗರ ಕನಸಿನ ಕರ್ನಾಟಕ ಮೈಸೂರು ರಾಜ್ಯ ಎಂದು ರಚನೆಯಾಯಿತು ಇದರ ಹೆಗ್ಗುರುತಾಗಿ "ಹಂಪೆಯ ಉಗ್ರನರಸಿಂಹ ಸ್ವಾಮಿ"ಗೆ ಅಭಿಷೇಕ ಮಾಡುವುದರೊಂದಿಗೆ ಕನ್ನಡಿಗರು ವಿಜ್ರುಂಬಣೆಯಿಂದ ಕರ್ನಾಟಕದ ಮಹೋತ್ಸವವನ್ನು ಆಚ್ಜರಿಸಿದರು, ನಿರಂತರ ಹೋರಾಟಗಳಿಂದ ದಣಿದಿದ್ದ ನಮ್ಮ "ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರು" ಕ್ರಿ.ಶ. ೨೫ ಫೆಬ್ರವರಿ ೧೯೬೪ ರಲ್ಲಿ ವಿಧಿವಶರಾದರು. ಅವರ ಮರಣದ ನಂತರವೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡಬೇಕು, ಎನ್ನುವ ಹೋರಾಟ ಮುಂದುವರೆಯಿತು, ಮೈಸೂರು ರಾಜ್ಯ ರಚನೆಯಾದ ನಂತರ ೧೮ ವರ್ಷಗಳ ನಿರಂತರ ಕಾನೂನು ಹೋರಾಟದಲ್ಲಿ ೧೯೭೪ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾಯಿತು.

ಹೀಗೆ ಕನ್ನಡಿಗರಿಗೆ ಕರ್ನಾಟಕ ದೊರೆಯಿತು.


ಹೆಸರಾಯಿತು ಕರ್ನಾಟಕ - ಉಸಿರಾಗಲಿ  ಕನ್ನಡ




 - ಇಂತಿ ನಿಮ್ಮ ಪ್ರೀತಿಯ ಗೆಳೆಯ.
ಮಂಜುನಾಥ ಗೌಡ
 

No comments:

Post a Comment