Thursday, 11 October 2012

ಹೆಮ್ಮೆಯ ಕನ್ನಡಿಗರು.....!!

ನಮಸ್ತೆ ಗೆಳೆಯರೇ.

ನಮ್ಮ ಎಷ್ಟೋ ಜನ ಕನ್ನಡಿಗರಿಗೆ ತಿಳಿಯದು ಜಗತ್ತಿನ ಎಷ್ಟೋ ಆರಂಭಗಳಿಗೆ ಕನ್ನಡಿಗರೇ ಮೊದಲಿಗರು ಎಂದು.

ವ್ಯಾಪಾರ : ಬಹುಷಃ ನಿಮಗೆ ಯಾರಿಗೂ ತಿಳಿದಿಲ್ಲ, ಕನ್ನಡಿಗರ ವ್ಯಾಪಾರದ ವೈಕರಿ, ನ್ನಡಿಗರು ಹರಪ್ಪ ನಾಗರೀಕತೆಯ ಜನರೊಂದಿಗಿನ ವ್ಯಾಪಾರದ ವಹಿವಾಟು ನಡೆಸುತ್ತಿದ್ದರು, ಇದು ಅಕ್ಷರಸಹ ಸತ್ಯ, ಇದಕ್ಕೆ ಸಾಕ್ಷಿ ಎನ್ನುವ ಹಾಗೆ
ಕರ್ನಾಟಕದಲ್ಲಿ ನಡೆದ ಭೂ ಶೋಧನೆಯಲ್ಲಿ ದೊರೆತಿರುವ ಕೊಡಲಿ ಮತ್ತು ಕತ್ತಿಗಳು (ಕಲ್ಲಿನ ಆಯುಧಗಳು) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕ್ರತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ಚಿನ್ನ, ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಇರುವ ಸಂಭಂದಕ್ಕೆ ಸಾಕ್ಷಿಯಾಗಿವೆ ಎನ್ನುವ ಪುರಾವೆಗಳನ್ನು ನೀಡಿದ್ದಾರೆ.
ವಾಸ್ತುಶಿಲ್ಪ ತಂತ್ರಜ್ಞಾನ : ಕನ್ನಡಿಗರು ವಾಸ್ತು ಶಿಲ್ಪದಲ್ಲಿಯು ಕೂಡ ಮುಂಚೂಣಿಯಲ್ಲಿದ್ದವರು. ಭಾರತದ ವಾಸ್ತುಶಿಲ್ಪವು ಒಂದು ತೂಕವಾದರೆ, ಕನ್ನಡಿಗರ ವಾಸ್ತುಶಿಲ್ಪ ಇನ್ನೊಂದು ತೂಕ. ಇದಕ್ಕೆ ಹುಗ್ಗುರುತು ಎನ್ನುವ ಹಾಗೆ ಹಲವಾರು ಸ್ಮಾರಕಗಳು ಕೋಟೆಗಳು ಈಗಲೂ ನಮ್ಮ ಮುಂದಿವೆ. ವಿಶ್ವದಲ್ಲೇ ಎಲ್ಲೂ ಕಾಣಲು ಸಾಧ್ಯವಾಗದ ವಿಶ್ವದ ಅತಿ ಬೃಹತ್ ಏಕಶಿಲಾ ವಿಗ್ರಹ, ಒಂದೇ ಕಲ್ಲಿನ ರಥ, ಸಂಗೀತದ ಕಲ್ಲಿನ ಕಂಬಗಳು, ಪುರಾತನ ಗುಹಾಂತದ ದೇವಾಲಯಗಳು ಕನ್ನಡಿಗರದಲ್ಲದೆ ಮತ್ತಿನೇನು.


ವಿಜ್ಞಾನ-ತಂತ್ರಜ್ಞಾನಕ್ಕೆ : ವಿಜ್ಞಾನ-ತಂತ್ರಜ್ಞಾನದಲ್ಲೂ ಕೂಡ ಕನ್ನಡಿಗರು ಯಾವತ್ತು ಹಿಂದೆ ಬಿದ್ದವರಲ್ಲ. ಇದಕ್ಕೆ ಉದಾಹರಣೆ,

ವಿಮಾನವನ್ನು ಕಂಡು ಹಿಡಿದವರು "ಆನೇಕಲ್ ಸುಬ್ಬಾಶಾಸ್ತ್ರಿ",

ಕ್ರಿ. ಶ. ೮೦೦ ರಲ್ಲಿ ಜೀವಿಸಿದ "ಸೈಗೊಟ್ಟ ಶಿವರಾಮರ-ಗಜಶಾಸ್ತ್ರ",

ಕ್ರಿ. ಶ. ೯೪೨ - ೧೦೨೫ರಲ್ಲಿ ೨ನೇ ಚಾವುಂಡರಾಯ ಬರೆದ "ಲೋಕೋಪಕಾರ" ಗ್ರಂತ (ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ) ಕನ್ನಡದಲ್ಲಿದೆ.

ಕ್ರಿ. ಶ. ೧೦೪೦ರ ಕಾಲದಲ್ಲಿ ಜೀವಿಸಿದ ಚಂದ್ರರಾಜರು ಬರೆದ "ಮದನತಿಲಕ" ಎನ್ನುವ ಕನ್ನಡದ "ಕಾಮಶಾಸ್ತ್ರ".

ಕ್ರಿ. ಶ. ೧೦೪೯ ರಲ್ಲಿ ಶ್ರೀಧರಾಚಾರ್ಯರು ರಚಿಸಿದ ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ "ಜಾತಕ ತಿಲಕ".

ಕ್ರಿ. ಶ. ೧೧೨೦ ರ ಕಾಲದಲ್ಲಿ ಜೀವಿಸಿದ ರಾಜಾದಿತ್ಯರು ರಚಿಸಿದ "ಗಣಿತ ಗ್ರಂಥ". ಇದು ಕೇವಲ ಸಾಮಾನ್ಯ ಗಣಿತವಾಗಿರದೆ, ಶ್ರೇಣಿಗಳ ಗಣಿತವಾಗಿತ್ತು ಎನ್ನುವುದು ಗಮನಾರ್ಹವಾದದ್ದು.

ಕ್ರಿ. ಶ. ೧೧೫೦ ರ ಕಾಲದಲ್ಲಿ ಜೀವಿಸಿದ "ಜಗದ್ಧಳ ಸೋಮನಾಥರು ರಚಿಸಿದ ಕಲ್ಯಾಣಕಾರವೆಂಬ ಗ್ರಂಥ ಕನ್ನಡದ ಮೊದಲ ವೈದ್ಯ ಶಾಸ್ತ್ರ ಗ್ರಂಥ.

ಕ್ರಿ. ಶ. ೧೧೫೦ ರ ಕಾಲದಲ್ಲಿ ಜೀವಿಸಿದ "ರಟ್ಟಕವಿ" ರಚಿಸಿದ "ರಟ್ಟಶಾಸ್ತ್ರ" (ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡು ಹಿಡಿಯುವ ಕಲೆ) ಕನ್ನಡದಲ್ಲಿದೆ.

ಇಷ್ಟೆಲ್ಲಾ ಯಾಕೆ ಈಗಿನ ಕಾಲದ ಅತ್ಯಾಧುನಿಕ ಕ್ಷಿಪಣಿಗಳನ್ನು ಕನ್ನಡಿಗರು ೧೭ನೆ ಶತಮಾನದಲ್ಲೇ ಬಳಸಿಲ್ಲವೇ.

೧೯ ನೆ ಶತಮಾನದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ವಿಧ್ಯುತ್ತನ್ನು ತಯಾರಿಸಲು ಸ್ಥಾವರಗಳನ್ನು ಸ್ಥಾಪಿಸಿದವರು ಕನ್ನಡಿಗರು ವಿಧ್ಯುತ್ತನ್ನು ಬಳಸಿದವರು ಕನ್ನಡಿಗರು.

ಇಷ್ಟೆಲ್ಲಾ ಏಕೆ "ಭಗವತ್ ಗೀತೆ"ಗೆ ಸಮನಾದ ಅಧುನಿಕ ಭಗವತ್ ಗೀತೆ " ಡಿ.ವಿ.ಜಿ.ಯವರ ಪದ್ಯ ಪುಸ್ತಕ "ಮಂಕು ತಿಮ್ಮನ ಕಗ್ಗ" ಇರುವುದು ಕನ್ನಡದಲ್ಲೇ ಮತ್ತು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಕನ್ನಡಿಗರೇ ಹೊರತು ಮತ್ತಾರು ಅಲ್ಲ.

ಶಿಕ್ಷಣ : ಮೀಸಲಾತಿ ಶಿಕ್ಷಣವನ್ನು ಮೊದಲಬಾರಿಗೆ ಜಾರಿಗೆ ತಂದವರು ಕನ್ನಡಿಗರೇ.

ಚಲನ ಚಿತ್ರ: ಒಮ್ಮೆ ನಮ್ಮ ಕರ್ನಾಟಕದ ಇತಿಹಾಸವನ್ನು ನೋಡಿದರೆ ನಮಗೆ ಕಾಣುವ ಮೊದಲ ಹಂತದ ಘಟಾನುಘಟಿ ರಾಜರುಗಳು ಎಂದರೆ, "ಮಯೂರ ವರ್ಮ, ಇಮ್ಮಡಿ ಪುಲಿಕೇಶೀ, ಶ್ರೀ ಕೃಷ್ಣದೇವರಾಯ ಮತ್ತು ರಣಧೀರ ಕಂಠೀರವ" ಇವರನ್ನು ನಾವ್ಯಾರು ಕಣ್ಣಾರೆ ಕಂಡಿಲ್ಲ, ಆದರೆ ಅವರು ಹೇಗಿರಬಹುದು ಎನ್ನುವದನ್ನು ನಾವು ನಮ್ಮ ಕನ್ನಡದ "ವರನಟ ಡಾ!! ರಾಜ್ ಕುಮಾರ್" ಅಭಿನಯದ ಚಲನ ಚಿತ್ರಗಳ ಮೂಲಖ ಕಾಣಬಹುದಾಗಿದೆ. ಇವರು ಸಹ ಕನ್ನಡಿಗರೇ ಹೊರತು ಮತ್ತಾರು ಅಲ್ಲ.

 - ಧನ್ಯವಾದಗಳು.

ಮಂಜುನಾಥ ಗೌಡ


No comments:

Post a Comment