ವಿಶ್ವಪ್ರಸಿದ್ಧ ಹಂಪಿ ಕಲ್ಲಿನ ರಥಕ್ಕೆ ಗೋಪುರವಿತ್ತು!
ಹೌದು
ಇದು ಆಶ್ಚರ್ಯವೆನಿಸಿದರೂ
ನಿಜ. ವಿಜಯನಗರ ಸಾಮ್ರಾಜ್ಯದಲ್ಲಿನ ಪ್ರಸಿದ್ಧ ದೊರೆ ಶ್ರೀಕೃಷ್ಣ ದೇವರಾಯನ ಆಳ್ವಿಕೆಯ ಕಾಲ ಸುಮಾರು 1520.
ಇವರ ಆಳ್ವಿಕೆಯಲ್ಲಿಯೇ
ವಿಜಯನಗರ ಉತ್ತುಂಗ ಸ್ಥಿತಿ ತಲುಪಿ, ಸುಂದರವಾದ ವಾಸ್ತು-ಶಿಲ್ಪಗಳು, ದೇಗುಲಗಳ ಕೆತ್ತನೆ ನಡೆದದ್ದು. ಆ ಸಂದರ್ಭದಲ್ಲೇ
ಬೆಣಚುಕಲ್ಲಿನಿಂದ ನಿರ್ಮಾಣವಾದ ಈ ರಥಕ್ಕೆ ಚೆಂದಾದ ಗೋಪುರವೊಂದಿತ್ತು. ವಿಜಯನಗರ
ಸಾಮ್ರಾಜ್ಯದ ವೈಭವೋಪೇತ ಜನಜೀವನದ ಬಗ್ಗೆ ಇತಿಹಾಸ ಸಂಶೋಧಕ ರಾಬರ್ಟ್ ಸೆವೆಲ್ ಬರೆದ
'ಎ ಫರ್ ಗಾಟನ್ ಎಂಪೈರ್'
ಪುಸ್ತಕದಲ್ಲಿ ಹಂಪಿ
ಕಲ್ಲಿನ ರಥದ ಬಗ್ಗೆ ವಿಸ್ತಾರವಾಗಿ ಬರೆದಿದ್ದು ಅದರ ಮೂಲಚಿತ್ರವನ್ನು
ಕಣ್ಣೆದುರಿಗೆ ತೆರೆದಿಟ್ಟಿದ್ದಾರೆ.
ಈಗಲಾದರೂ ನಮ್ಮ ಕನ್ನಡಿಗರು ನಮ್ಮ ರಾಜ್ಯ ಸರ್ಕಾರ ಮತ್ತು ಪ್ರವಾಸೋಧ್ಯಮ ಇಲಾಖೆಯ ಮೇಲೆ ಒತ್ತಡ ಹೇರಿ ಇದರ ಅಭಿವೃದ್ಧಿಗೆ ಒಟ್ಟು ನೀದುತಾರೆ ಎನ್ನುವ ನಂಬಿಕೆ ನನಗಂತೂ ಇಲ್ಲ. ನಮ್ಮ ಕುರಿತು ಯಾರೋ ವಿದೇಶಿಯರು ಹೇಳದ ಹೊರತು ನಮಗೆ ನಮ್ಮ ಬಗ್ಗೆ ತಿಳಿಯುವುದಿಲ್ಲ.
ಈ
ಚಿತ್ರವನ್ನು ನೋಡಿದರೆ ಇತಿಹಾಸದ ಗ್ರಹಿಕೆ ಮತ್ತು ನಮಗಿರುವ ಜ್ಞಾನದ ಬಗ್ಗೆ ಯೋಚನೆಗೆ
ಅಚ್ಚುತ್ತದೆ. ರಾಬರ್ಟ್ ಸೆವೆಲ್ ಪುಸ್ತಕ ಪ್ರಕಟವಾದದ್ದು 1900ರಲ್ಲಿ. ಈ ಚಿತ್ರವನ್ನು ಸುಮಾರು ಒಂದು ಶತಮಾನದ ಹಿಂದೆ
ತೆಗೆದದ್ದು. ಈ ನಡುವೆ 1986ರವರೆಗೆ
ಅಂದರೆ ಯುನೆಸ್ಕೋ
ವರ್ಲ್ಡ್ ಹೆರಿಟೆಜ್ ಸೈಟ್ ಎಂದು ಘೋಷಿಸುವವರೆಗೂ ಈ ಹಂಪಿಯಗತಿ ಹೇಗಿತ್ತು ಎಂಬುದನ್ನು
ಊಹಿಸಬಹುದು. ಗೋಪುರವಿಲ್ಲದ ರಥದಂತೆ ಕಳೆದ ಐದುನೂರು ವರ್ಷಗಳಲ್ಲಿ ಅಲ್ಲಿ ಏನೇನಾಯಿತು
ಎಂಬುದು ಅವರವರ ಊಹೆಗೆ ಬಿಟ್ಟದ್ದು.
ಈಗಲೂ ನಮ್ಮ ಅನೇಕ ಕನ್ನಡಿಗರ ಮನೆಯಲ್ಲಿ ಪುರಾತನ ತಾಳೆಗರಿಗಳು, ಗ್ರಂಥಗಳು ಹೇರಳವಾಗಿವೆ, ದಯವಿಟ್ಟು ಅದನ್ನು ಹಾಳುಮಾಡದೆ ಮಾಧ್ಯಮಗಳ ಮುಖಾಂತರ ಪುರಾತತ್ವ ಇಲಾಖೆಯ ಸಹಾಯದಿಂದ ಅದನ್ನು ಭಾಷಾಂತರಿಸಿ ಅದರ ತಂತ್ರಜ್ಞಾನವನ್ನು ಭಾರತಕ್ಕೆ ಸಮರ್ಪಿಸಿ.
ಅಲೆಕ್ಸಾಂಡರ್ ಗ್ರೀನ್ಲಾವ್ ಅವರು ೧೮೫೬ರಲ್ಲಿ "ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ಕೆಲವು" ಭಾವಚಿತ್ರಗಳು.
ಈಗಲೂ ನಮ್ಮ ಅನೇಕ ಕನ್ನಡಿಗರ ಮನೆಯಲ್ಲಿ ಪುರಾತನ ತಾಳೆಗರಿಗಳು, ಗ್ರಂಥಗಳು ಹೇರಳವಾಗಿವೆ, ದಯವಿಟ್ಟು ಅದನ್ನು ಹಾಳುಮಾಡದೆ ಮಾಧ್ಯಮಗಳ ಮುಖಾಂತರ ಪುರಾತತ್ವ ಇಲಾಖೆಯ ಸಹಾಯದಿಂದ ಅದನ್ನು ಭಾಷಾಂತರಿಸಿ ಅದರ ತಂತ್ರಜ್ಞಾನವನ್ನು ಭಾರತಕ್ಕೆ ಸಮರ್ಪಿಸಿ.
ಅಲೆಕ್ಸಾಂಡರ್ ಗ್ರೀನ್ಲಾವ್ ಅವರು ೧೮೫೬ರಲ್ಲಿ "ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ಕೆಲವು" ಭಾವಚಿತ್ರಗಳು.

.jpg)
















