Friday, 28 September 2012

ಅಂದಿನ ಕನ್ನಡಿಗರ ಅದ್ಭುತ ಕಲೆ.




ವಿಶ್ವಪ್ರಸಿದ್ಧ ಹಂಪಿ ಕಲ್ಲಿನ ರಥಕ್ಕೆ ಗೋಪುರವಿತ್ತು!


ಹೌದು ಇದು ಆಶ್ಚರ್ಯವೆನಿಸಿದರೂ ನಿಜ. ವಿಜಯನಗರ ಸಾಮ್ರಾಜ್ಯದಲ್ಲಿನ ಪ್ರಸಿದ್ಧ ದೊರೆ ಶ್ರೀಕೃಷ್ಣ ದೇವರಾಯನ ಆಳ್ವಿಕೆಯ ಕಾಲ ಸುಮಾರು 1520. ಇವರ ಆಳ್ವಿಕೆಯಲ್ಲಿಯೇ ವಿಜಯನಗರ ಉತ್ತುಂಗ ಸ್ಥಿತಿ ತಲುಪಿ, ಸುಂದರವಾದ ವಾಸ್ತು-ಶಿಲ್ಪಗಳು, ದೇಗುಲಗಳ ಕೆತ್ತನೆ ನಡೆದದ್ದು. ಆ ಸಂದರ್ಭದಲ್ಲೇ ಬೆಣಚುಕಲ್ಲಿನಿಂದ ನಿರ್ಮಾಣವಾದ ಈ ರಥಕ್ಕೆ ಚೆಂದಾದ ಗೋಪುರವೊಂದಿತ್ತು. ವಿಜಯನಗರ ಸಾಮ್ರಾಜ್ಯದ ವೈಭವೋಪೇತ ಜನಜೀವನದ ಬಗ್ಗೆ ಇತಿಹಾಸ ಸಂಶೋಧಕ ರಾಬರ್ಟ್ ಸೆವೆಲ್ ಬರೆದ 'ಎ ಫರ್ ಗಾಟನ್ ಎಂಪೈರ್' ಪುಸ್ತಕದಲ್ಲಿ ಹಂಪಿ ಕಲ್ಲಿನ ರಥದ ಬಗ್ಗೆ ವಿಸ್ತಾರವಾಗಿ ಬರೆದಿದ್ದು ಅದರ ಮೂಲಚಿತ್ರವನ್ನು ಕಣ್ಣೆದುರಿಗೆ ತೆರೆದಿಟ್ಟಿದ್ದಾರೆ.

 ನಮ್ಮಿಂದ ಒಂದು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ, ಆದರೆ ಸೃಸ್ತಿಯಾಗಿರುವ ಅಭೂತ ಪೂರ್ವ ಇತಿಹಾಸವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ.

 ಈಗಲಾದರೂ ನಮ್ಮ ಕನ್ನಡಿಗರು ನಮ್ಮ ರಾಜ್ಯ ಸರ್ಕಾರ ಮತ್ತು ಪ್ರವಾಸೋಧ್ಯಮ ಇಲಾಖೆಯ ಮೇಲೆ ಒತ್ತಡ ಹೇರಿ ಇದರ ಅಭಿವೃದ್ಧಿಗೆ ಒಟ್ಟು ನೀದುತಾರೆ ಎನ್ನುವ ನಂಬಿಕೆ ನನಗಂತೂ ಇಲ್ಲ. ನಮ್ಮ ಕುರಿತು ಯಾರೋ ವಿದೇಶಿಯರು ಹೇಳದ ಹೊರತು ನಮಗೆ ನಮ್ಮ ಬಗ್ಗೆ ತಿಳಿಯುವುದಿಲ್ಲ.

ಈ ಚಿತ್ರವನ್ನು ನೋಡಿದರೆ ಇತಿಹಾಸದ ಗ್ರಹಿಕೆ ಮತ್ತು ನಮಗಿರುವ ಜ್ಞಾನದ ಬಗ್ಗೆ ಯೋಚನೆಗೆ ಅಚ್ಚುತ್ತದೆ. ರಾಬರ್ಟ್ ಸೆವೆಲ್ ಪುಸ್ತಕ ಪ್ರಕಟವಾದದ್ದು 1900ರಲ್ಲಿ. ಈ ಚಿತ್ರವನ್ನು ಸುಮಾರು ಒಂದು ಶತಮಾನದ ಹಿಂದೆ ತೆಗೆದದ್ದು. ಈ ನಡುವೆ 1986ರವರೆಗೆ ಅಂದರೆ ಯುನೆಸ್ಕೋ ವರ್ಲ್ಡ್ ಹೆರಿಟೆಜ್ ಸೈಟ್ ಎಂದು ಘೋಷಿಸುವವರೆಗೂ ಈ ಹಂಪಿಯಗತಿ ಹೇಗಿತ್ತು ಎಂಬುದನ್ನು ಊಹಿಸಬಹುದು. ಗೋಪುರವಿಲ್ಲದ ರಥದಂತೆ ಕಳೆದ ಐದುನೂರು ವರ್ಷಗಳಲ್ಲಿ ಅಲ್ಲಿ ಏನೇನಾಯಿತು ಎಂಬುದು ಅವರವರ ಊಹೆಗೆ ಬಿಟ್ಟದ್ದು. 

ಈಗಲೂ ನಮ್ಮ ಅನೇಕ ಕನ್ನಡಿಗರ ಮನೆಯಲ್ಲಿ ಪುರಾತನ ತಾಳೆಗರಿಗಳು, ಗ್ರಂಥಗಳು ಹೇರಳವಾಗಿವೆ, ದಯವಿಟ್ಟು ಅದನ್ನು ಹಾಳುಮಾಡದೆ ಮಾಧ್ಯಮಗಳ ಮುಖಾಂತರ ಪುರಾತತ್ವ ಇಲಾಖೆಯ ಸಹಾಯದಿಂದ ಅದನ್ನು ಭಾಷಾಂತರಿಸಿ ಅದರ ತಂತ್ರಜ್ಞಾನವನ್ನು ಭಾರತಕ್ಕೆ ಸಮರ್ಪಿಸಿ.




ಅಲೆಕ್ಸಾಂಡರ್ ಗ್ರೀನ್ಲಾವ್  ಅವರು ೧೮೫೬ರಲ್ಲಿ "ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ಕೆಲವು" ಭಾವಚಿತ್ರಗಳು.

Wednesday, 26 September 2012

ಪುರಾತನ ಕನ್ನಡ ಅಧುನಿಕ ಕನ್ನಡಿಗ.





ನಮಸ್ಕಾರ ಗೆಳೆಯರೇ,

ನಾವು ಕನ್ನಡಿಗರು ಮೂಲ ಕರ್ನಾಟಕದವರು, ಕನ್ನಡಿಗರು ವಿಶಾಲ ಮನೋಭಾವದವರು ಎಂದೆಲ್ಲ ಹೇಳುವ ನಾವು. ಅನ್ಯ ಭಾಷಿಗರೊಂದಿಗೆ ಕನ್ನಡವನ್ನು ಮಾತನಾಡಿ ಅವರಿಗೆ ಕನ್ನಡ ಕಲಿಸುವುದಿಲ್ಲ. ನಾವೇ ಅವರ ಭಾಷೆಯನ್ನೂ ಕಲಿತು ಅವರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುವ ಹುಮ್ಮಸ್ಸು ತೋರುತ್ತೇವೆ.

ನಮ್ಮ ಭಾಷೆಯ ಹಿರಿಮೆ ಏನೆಂದು ನಮಗೆ ತಿಳಿದಿಲ್ಲ. ನನಗೆ ಎಷ್ಟೋಜನ ಹಿರಿಯರು ಹೇಳಿದ್ದರು, ತಮಿಳರದ್ದು ದುರಾಭಿಮಾನ, ಮಳಿಯಾಳಿಗಳದ್ದು ಶೃಂಗಾರಾಭಿಮಾನ, ತೆಲುಗಿನರದ್ದು ಅಭಿಮಾನ, ಕನ್ನಡಿಗರದ್ದು ನಿರಭಿಮಾನ. ಯಾಕೆಂದರೆ ನಮ್ಮ ಕನ್ನಡಿಗರಿಗೆ ಭಾಷೆ ಎಂದರೆ ಅದು ಒಂದು ಸಂಸ್ಕೃತಿ ಅನ್ನೋದೇ ಮರೆತು ಹೋಗಿದೆ. ನಮ್ಮ ಕವಿಗಳು ಕನ್ನಡ ನಾಡು, ನುಡಿ, ಜಲ ಅರಣ್ಯ, ಸಹ್ಯಾದ್ರಿಯ ಕುರಿತು ಎಷ್ಟೆಲ್ಲಾ ಹಾಡಿ ಹೊಗಳಿದ್ದಾರೆ, ಎಂದು ಇಲ್ಲಿರುವ ಹಾಡನ್ನು ಒಮ್ಮೆ ಕೇಳಿ.

 "ಹಲ್ಮಿಡಿ ಶಾಸನ"ದ ಆಧಾರದ ಮೇಲೆ ನಮ್ಮ ಕನ್ನಡ ೧೭೦೦ ವರ್ಷಗಳಷ್ಟು ಹಳೆಯದು ಅಂತ ಹೇಳುವ ನಾಮಗೆ, "ರೋಥೆರ್ಹಂ ಸಿ. ಮಯೋ" ವಿದೇಶಿ ಪತ್ರಕರ್ತನೊಬ್ಬ ತನ್ನ ದೇಶೀಯ ಪತ್ರಿಕೆಯಲ್ಲಿ ಕನ್ನಡದ ಬಗ್ಗೆ ಹೇಳುವ ತನಕ ನಮಗೆ ತಿಳಿದಿಲ್ಲ, ನಮ್ಮ "ಸಿಂಧೂ ಬಯಲಿನ ನಾಗರೀಕತೆ"ಯ ಜನರು ಕನ್ನಡವನ್ನು ಆಡುಭಾಷೆಯಾಗಿ ಬಳಸುತ್ತಿದ್ದರು ಎಂದು ಕನ್ನಡ ಭಾಷೆ ಸುಮಾರು ೧೦,೦೦೦ ವರ್ಷಗಳಷ್ಟು ಹಳೆಯದು ಎಂದು ತೋರಿಸಿದವರು.
. ಇದಾದ ನಂತರ ನಮ್ಮ ಜನ ಕನ್ನಡದ ಕುರಿತು ಅಧ್ಯಾಯನಕ್ಕಾಗಿ ರಾಜ್ಯ ಸರ್ಕಾರದ ಮೇಲಾಗಲಿ - ಕೇಂದ್ರ ಸರ್ಕಾರದ ಮೇಲಾಗಲಿ ಅಥವಾ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮೇಲಾಗಲಿ ಒತ್ತಡವನ್ನು ಹೇರುವುದಿಲ್ಲ.


ನಮ್ಮ ಕನ್ನಡದ ಭಾಷೆ ವಿಶ್ವದ ಪ್ರಾಚಿನ ಮೂರು ಭಾಷೆಗಳಲ್ಲಿ ಒಂದು ಮತ್ತು ನಮ್ಮ ಕನ್ನಡ ಭಾಷೆ "ಗಿನ್ನಿಸ್" ಪುಸ್ತಕದಲ್ಲಿ ದಾಖಲೆಯಾಗಿದೆ ಎಂದು ನಮಗೆ ತಿಳಿದದ್ದು ವಿಶೇಷಿ ಪತ್ರಿಕೆಯಲ್ಲಿ ಪ್ರಕಟವಾದ ನಂತರ. ಅಂದರೆ ತಿಳಿದುಕೊಳ್ಳಿ ನಮ್ಮ ಕನ್ನಡಿಗರಿಗೆ ಭಾಷಾಭಿಮಾನ ಎಂದರೆ ಏನು ಅಂತ...??

ಒಂದು ಕಾಲದಲ್ಲಿ ಅಖಂಡ ಭಾರತನ್ನೇ ಕರ್ನಾಟಕದ ಗಡಿಯಾಗಿ ಮಾಡಿಕೊಂಡು ಆಳಿದ (ಒಂದನೇ ಗೋವಿದ ವರಮಾನ ಕಾಲದಲ್ಲಿ) ಕನ್ನಡಿಗರು, ಇಂದು ಕರ್ನಾಟಕದ ಗಡಿಗಾಗಿ ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನೊಂದಿಗೆ ಹೋರಾಡಬೇಕಾಗಿದೆ.

ನರ್ಮದ ನದಿಗೆ ಆನೆಗಳನ್ನೇ ಸೇತುವೆಯಾಗಿ ಬಳಸಿ ನಮ್ಮ ಕರ್ನಾಟಕದ ಚಕ್ರವರ್ತಿ ಇಮ್ಮಡಿ ಪುಲಿಕೇಶೀ ಉತ್ತರದ ಹರ್ಷವರ್ಧನನನ್ನು ಸೋಲಿಸಿ "ಕನ್ನಡಿಗರು ಹೇಡಿಗಳಲ್ಲ - ವೀರರು, ಧೀರರು, ಜ್ಞಾನಿ-ವಿಜ್ಞಾನಿಗಳು, ಸುಸಂಸ್ಕೃತರು, ಭಾಷಾಭಿಮಾನಿಗಳು ಮತ್ತು ದೇಶಾಭಿಮಾನಿಗಳು" ಎಂದು ಸ್ನೇಹಕ್ಕೆ ಗುರುತಾಗಿ ಹರ್ಷವರ್ಧನನ ಸಾಮ್ರಾಜ್ಯವನ್ನು ಅವರಿಗೆ ಹಿದಿರುಗಿಸಿದವರು ನಾವು.ಅಂತಹ ಕನ್ನಡಿಗರು ಭಾಷೆಯ ಉಳಿವಿಗಾಗಿ ಹೋರಾಡುವ ಅನಿವಾರ್ಯ ಉಂಟಾಗಿದೆ.

ಭಾರತೀಯ ಸೇನಾಪಡೆಗೆ ಕನ್ನಡಿಗರ ಕೊಡುಗೆ ಅಪಾರ (ಜನರಲ್. ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಕರ್ನಲ್ ವಸಂತ್,) ಇವರು ಕನ್ನಡಿಗರು ಭಾರತ ಸೇನೆಯ ಸಿಂಹಗಳು ಎಂದೇ ಗುರುತಿಸಿಕೊಂಡವರು. ಇವರ ಬಗ್ಗೆ ಎಷ್ಟು ಜನ ಕನ್ನಡಿಗರಿಗೆ ಗೊತ್ತು.

ವಿಮಾನವನ್ನು ಕಂಡು ಹಿಡಿದವರು ಯಾರು ಎಂದು ನಾವು ಯಾವ ಮಕ್ಕಳಿಗೆ ಕೇಳಿದರು ತಕ್ಷಣ ಸಿಗುವ ಉತ್ತರ "ರೈಟಾ ಸಹೋದರರು" ಆದರೆ ನಿಜವಾದ ಸಂಗತಿ ವಿಮಾನವನ್ನು ಕಂಡುಹಿಡಿದವರು ನಮ್ಮ ಕನ್ನಡಿಗರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ " ಆನೇಕಲ್ ಸುಬ್ಬ ಶಾಸ್ತ್ರಿ" ಎನ್ನುವ ವಿಜ್ಞಾನಿ. ಈ ಕನ್ನಡಿಗನ ಬಗ್ಗೆ ಎಷ್ಟುಜನ ಕನ್ನಡಿಗರಿಗೆ ಗೊತ್ತು.

ಭಗವಧ್ಗೀತೆಗೆ ಸರಿ-ಸಮ ಎಂದು ಬಿಂಭಿಸುವ ಗ್ರಂಥ "ಮಂಕು ತಿಮ್ಮನ ಕಗ್ಗ" ಇದನ್ನು ಕನಡದ ಭಗವಧ್ಗೀತೆ ಎಂದು ಕರೆಯುವ ಗ್ರಂಥವನ್ನು ಬರೆದವರು ನಮ್ಮ ಡಿ. ವಿ. ಗುಂಡಪ್ಪ (ಡಿ.ವಿ.ಜಿ) ಇವರು ಸಹ ಕನ್ನಡಿಗರೇ.

ವಿಶ್ವದ ಯಾವುದೇ ರಾಜ್ಯಕ್ಕೆ ತನ್ನದೇ ಆದ ನಾಡ ಗೀತೆಯಾಗಲಿ, ರೈತ ಗೀತೆಯಾಗಲಿ ಅಥವಾ ಸಂಸ್ಕೃತಿಯನ್ನು ಬಿಂಭಿಸುವ ಭಾವುಟವಾಗಲಿ ಇಲ್ಲ, ಆದರೆ ಇವೆಲ್ಲ ನಮ್ಮ ಕರುಣೆಯ ನಾಡು ಕರ್ನಾಟಕಕ್ಕೇ ಇದೆ. ಇದು ಕನ್ನಡಿಗನ ಹಿರಿಮೆಗೆ ಒಂದು ಗರಿ.

ಹೀಗೆ ಹೇಳುತಾ ಹೋದರೆ ಕೊನೆ ಇಲ್ಲದ ಬರವಣಿಗೆ ಹಾಗಾಗಿ ಬಿಡುತ್ತದೆ. 

ಇನ್ನು ಸಮಯ ಸಿಕ್ಕಾಗ ಕನ್ನಡದ ಬಗ್ಗೆ ನಿಮಗೆ ತಿಳಿಸುತ್ತೇನೆ.

ಕನ್ನಡ ಉಳಿಯಲು-ಅಳಿಯಲು ಕನ್ನಡಿಗರೇ ಕಾರಣ.

ಕನ್ನಡ ಭಾಷೆಯನ್ನೂ ಕಲಿಯಿರಿ ಕಲಿಸಿರಿ ಉಳಿಸಿರಿ.


ಜೈ ಭುವನೇಶ್ವರಿ.......!!! ಜೈ ಕರ್ನಾಟಕ......!!

 - ಮುಂದುವರೆಯುತ್ತದೆ.


 - ಇಂತಿ ನಿಮ್ಮ ಪ್ರೀತಿಯ ಗೆಳೆಯ.

ಮಂಜುನಾಥ ಗೌಡ





Tuesday, 25 September 2012

ಪುಟ್ಟ ಮತ್ತು ಕೋಳಿ ಮಾರುವವನು.



ಒಂದು ಸಣ್ಣ ಊರು ಆ ಊರಿನ ಕೊನೆಯಲ್ಲಿ ಒಂದು ಸಣ್ಣ ಗುಡಿಸಲು, ಆ ಗುಡಿಸಲಲ್ಲಿ ಪುಟ್ಟ ಮತ್ತು ಪುಟ್ಟಣ ತಾಯಿ ರಂಗಮ್ಮ ಜೀವನ ನಡೆಸುತ್ತಿರುತ್ತಾನೆ. ಆ ಊರಿನ ಗೌಡರ ಮನೆಯಲ್ಲಿ ರಂಗಮ್ಮನ ಕೆಲಸ, ಗೌಡರಿಗೆ ಪುಟ್ಟನೆಂದರೆ ಪಂಚಪ್ರಾಣ ಕಾರಣ ಪುಟ್ಟ ತುಂಬಾ ಬುದ್ದಿವಂತ, ಆದರೆ ಅವನಿಗೆ ಒಂದು ಕಾಲು ಇರಲಿಲ್ಲ ಇದರಿಂದ ಊರಿನ ಇತರೆ ಮಕ್ಕಳು "ಕುಂಠ - ಕುಂಠ" ಎಂದು ರೇಗಿಸುತ್ತಿದ್ದರು ಆದರೆ ನಮ್ಮ ಪುಟ್ಟ ಅದರ ಬಗ್ಗೆ ಪ್ರತಿಕ್ರಿಯಿಸುತ್ತಿರಲಿಲ್ಲ.

ಒಂದು ದಿನ ಆ ಊರಿಗೆ ಒಬ್ಬ ಕೋಳಿ ಮಾರುವವನು ಬಂದ, ಗೌಡರು ಕೋಳಿ ವ್ಯಾಪಾರ ಮಾಡುತ್ತಿದ್ದರು, ಆ ಕೋಳಿಗಳ ಹಿಂಡಿನಲ್ಲಿ ಒಂದು ಕಾಲಿನ ಕೋಳಿ ಮರಿ ಕುಂಟುತ್ತ ಆಡುತ್ತಿತ್ತು ಅದನ್ನು ಪುಟ್ಟ ತೆಗೆದುಕೊಂಡು ಇದನ್ನು ತನಗೆ ಕೊಡಿಸಲು ಗೌಡರಿಗೆ ವಿನಯದಿಂದ ಕೇಳಿದನು, ಆದರೆ ಕೋಳಿ ಮಾರುವವನು ಆಶ್ಚರ್ಯದಿಂದ ಕೇಳಿದ ಅಲ್ಲ ಮಗು ಈ ಹಿಂಡಿನಲ್ಲಿ ಎಷ್ಟೊಂದು ಒಳ್ಳೊಳ್ಳೆ ಕೋಳಿಗಳಿರಬೇಕಾದರೆ ನಿನಗೆ ಈ ಒಂಟಿ ಕಾಲಿನ ಕೋಳಿ ಯಾಕೆ ಬೇಕು ಎಂದು ಕೇಳಿದ. ಪುಟ್ಟ ತುಂಬಾ ಸೌಜನ್ಯದಿಂದ ತನ್ನ ಷರಾಯಿಯಾ (ಪ್ಯಾಂಟು) ಒಂದು ಕಾಲಿನ ಬಟ್ಟೆಯನ್ನು ಮೇಲಕ್ಕೆ ಸರಿಸಿ ತನ್ನ ಕೃತಕ ಕಾಲನ್ನು ತೋರಿಸಿ ಹೀಗೆ ಹೇಳಿದ.

ಅಂಗ ವೈಕಲ್ಯ ಒಂದು ಶಾಪವಲ್ಲ - ಇದು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಪ್ರಪಂಚದಲ್ಲಿ ಅತಿ ಪ್ರಾಮುಖ್ಯ ಮತ್ತು ಕಷ್ಟಕರವಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ನಮ್ಮಂತಹ ಅಂಗ ವಿಕಲತೆ ಇರುವವರು. ಅಂಗ ವಿಕಲತೆ ಇರುವುದು ನನ್ನ ದೇಹಕ್ಕೆ ಹೊರತು ನನ್ನ ಬುದ್ದಿ ಶಕ್ತಿಗಲ್ಲ ನನ್ನ ಮಾನಸಿಕ ಶಕ್ತಿಗಲ್ಲ. ಎಂದು ಬುದ್ದಿಮಾತನ್ನು ಹೇಳಿದನು.

ಅಂಗ ವಿಕಲರಿಗೆ ಬೇಕಾಗಿರುವುದು ಅವಕಾಶ - ಅನುಕಂಪವಲ್ಲ.
ಕೆಲಸ ಕೊಡಿ - ಬಿಕ್ಷೆ ಹಾಕಬೇಡಿ.
ಬುದ್ದಿಮಾತು ಹೇಳಿ - ಅಲ್ಲಗಳೆಯಬೇಡಿ.
ಸಹಾಯ ಮಾಡಿ - ಕಷ್ಟ ಕೊಡಬೇಡಿ.
ನಮ್ಮಲ್ಲಿ ನಂಬಿಕೆಯಿಡಿ - ನೋಯಿಸಬೇಡಿ.
ನಮ್ಮನ್ನು ಮಾನವೀಯತೆಯಿಂದ ನೋಡಿ - ಅಮಾನವೀಯತೆ ಬೇಡ.

 - ಇಂತಿ ನಿಮ್ಮ ಪ್ರೀತಿಯ ಗೆಳೆಯ.

ಮಂಜುನಾಥ ಗೌಡ.
 

Friday, 21 September 2012

ಆಮೆ ಮತ್ತು ಮೊಲದ ಕಥೆ ಮುಂದು ವರೆದ ಬಾಗ....




ನಮಸ್ಕಾರ ಗೆಳೆಯರೇ.zzzzzzzzzzzz
ನಿಮ್ಮ ಎಲ್ಲರಿಗೂ "
ಆಮೆ ಮತ್ತು ಮೊಲ"ದ ಕಥೆ ಗೊತ್ತೇ ಇದೆ ಅದರಲ್ಲಿ ಮೊಲ ತನ್ನ ಅಹಂಕಾರದಿಂದ ಆಮೆಯ ಎದುರು ಸೋತು ಸುಣ್ಣವಾಗಿದ್ದು. ಅದರ ಮುಂದುವರೆದ ಬಾಗ ಈಗ ಪ್ರಕಟಿಸುತ್ತಿದ್ದೇನೆ.
ಈಗಿನ ಪೀಳಿಗೆ ಮಕ್ಕಳು ತುಂಬಾ ಬುದ್ದಿವಂತರು ಮತ್ತು ಹೆಚ್ಚು ಆಲೋಚಿಸುವ ಶಕ್ತಿಯುಳ್ಳವರು, ಇದು ನನಗೆ ಪ್ರಾಯೋಗಿಕವಾಗಿ ತಿಳಿದು ಬಂದಿದ್ದು ನನ್ನ ಓರ್ವ ಗೆಳೆಯನ ಮಗಳಿಗೆ ಈ "
ಆಮೆ ಮತ್ತು ಮೊಲ"ದ ಕಥೆಯನ್ನು ಹೇಳಿದ ಕಥೆ ಮುಗಿದ ಕೂಡಲೇ ಆ ೩ ವರ್ಷದ ಮಗು ನನಗೆ ಕೇಳಿದ ಪ್ರಶ್ನೆ ಮಾಮ ಆ ಆಮೆ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೆ ಇನ್ನು ಬೇಗ ಗುರಿ ಮುಟ್ಟುತ್ತಿತ್ತು ಅಲ್ವ ಎಂದು ಕೇಳಿತು. ನಾನಾಗ ಅಂದುಕೊಂಡ ಅಬ್ಬಾ...!! ಈ ಪೀಳಿಗೆಯ ಮಕ್ಕಳೇ ಇಷ್ಟು ಆಲೋಚಿಸ ಬೇಕಾದರೆ ಇನ್ನು ಮುಂದಿನ ಪೀಳಿಗೆಯ ಮಕ್ಕಳು ಪ್ರಳಯಾಂತಕರೆ ಹೌದು.ಆಮೆ ಮತ್ತು ಮೊಲದ ಕಥೆ ಮುಂದು ವರೆದ ಬಾಗ....
ಮೊಲ ಓಟದಲ್ಲಿ ಸೋತ ನಂತರ ಈ ಸೋಲು ನುಂಗಲಾಗದ ತುತ್ತಾಗಿ ಪರಿಣಮಿಸಿತು, ಅಮೆಗೆ ಸರಿಯಾದ ಪಾಠ ಕಲಿಸಲು ಸಮಯಕ್ಕಾಗಿ ಕಾತು ತನ್ನ ಮರಿ ಮೂಲವನ್ನು ಓಟಕ್ಕೆ ತಯ್ಯಾರು ಮಾಡಲು ತನ್ನನ್ನು ತಾನು ತೊಡಗಿಸಿಕೊಂಡಿತು. ಇತ್ತ ಆಮೆಯು ಕೂಡ ಸುಮನ್ನೇ ಇರದೇ ಮೊಲದ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಸಜ್ಜಾಗುತ್ತಿತ್ತು. ಕಾಲ ಕಳೆದಂತೆ "ಆಮೆ ಮತ್ತು ಮೊಲ"ದ ಮರಿಗಳು ಓಟಕ್ಕೆ ತಯಾರಾದವು. ಕಾಡಿನಲ್ಲಿ ಮತ್ತು ಕುತೂಹಲ ಮನೆ ಮಾಡಿತು, ಓಟದ ದಿನವು ನಿಗದಿಯಾಯಿತು.

ನರಿ ತೀರ್ಪುಗಾರನಾಗಿ ಓಟದ ಮಾರ್ಗವನ್ನು ತಿಳಿಸಿ ಓಟ ಪ್ರಾರಂಭಿಸಲು ಹೇಳಿತು. ಓಟ ಶುರುವಾದಂತೆ ಮೊಲ ಚಂಗನೆ ನೆಗೆದು ನೋಡ-ನೋಡುತ್ತಿದ್ದಂತೆ  ವೇಗವಾಗಿ ಓದಲು ಪ್ರಾರಂಭಿಸಿತು.  ಆದರೆ ಆಮೆ ಓಡುವ ಬದಲಾಗಿ ಹಾರುತ್ತಿತ್ತು. ಇದನ್ನು ಕಂಡ ಮೊಲ ಮೂರ್ಚೆಹೋಯಿತು, ಆಮೆ ಗುರಿ ತಲುಪಿತು ಮೊಲ ಬಂದ ದಾರಿಗೆ ಸುಂಖವಿಲ್ಲ ಎಂದು ಸುಮ್ಮನೆ ಹಿಂದಿರುಗಿತು.

ನೀತಿ : ಸೋಲಿಸೋಕೆ ದಾರಿ ಹುಡುಕುವವರನ್ನು ಗೆಲ್ಲೋಕೆ ಅಂತ ಹಲವರು ಇರ್ತಾರೆ.


 - ಇಂತಿ ನಿಮ್ಮ ಪ್ರೀತಿಯ ಗೆಳೆಯ.
ಮಂಜುನಾಥ ಗೌಡ.

Thursday, 20 September 2012

ಮೂರು ಕಥೆ - ಒಂದೇ ಅರ್ಥ

ನಮಸ್ಕಾರ ಗೆಳೆಯರೇ.

ನಿಮಗೆ ನಾನು ಒಂದೇ ಅರ್ಥವನ್ನು ಹೇಳುವ ಮೂರು ಸಣ್ಣ ಕಥೆಗಳನ್ನು ಬರೆಯುತ್ತಿದ್ದೇನೆ.

ಒಂದನೇಯ ಕಥೆ :  

ಬೇಸಿಗೆ ಮುಗಿದರು ನಮ್ಮ ಹಳ್ಳಿಯ ಜನ ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದರು, ಮಳೆಗಾಲದಲ್ಲೂ ಮಳೆಯಿಲ್ಲದೆ ಜನ ದೇವರ ಮೊರೆಹೋದರು, ಮಳೆ ಬರಲೆಂದು ಪ್ರಾರ್ಥಿಸಲು. ಹಳ್ಳಿಯ ಜನರೆಲ್ಲರೂ ಪೂಜೆ ಸಾಮಗ್ರಿಗಳೊಂದಿಗೆ ದೇವಾಲಯಕ್ಕೆ ಬಂದರು, ಆದರೆ ಅದೇ ಹಳ್ಳಿಯ ಒಬ್ಬ ಸಣ್ಣ ಹುಡುಗ ಮಾತ್ರ ಒಂದು ಕೊಡೆ (ಛತ್ರಿ)ಯೊಂದಿಗೆ ಬಂದ. ದೇವರು ಮಳೆಯನ್ನೂ ಬರಿಸುತಾನೆ ಎನ್ನುವ ಬಲವಾದ ನಂಬಿಕೆಯೊಂದಿಗೆ.




ಎರಡನೇಯ ಕಥೆ :
ಒಬ್ಬ ತಂದೆ ತನ್ನ ಒಂದು ವರ್ಷದ ಮಗುವನ್ನು ಪ್ರತಿಬಾರಿಯೂ ಗಾಳಿಯಲ್ಲಿ ಮೇಲಕ್ಕೆ ಎಸೆಯುವಾಗ ಅದು ಪ್ರತಿಬಾರಿಯೂ ನಗುತ್ತದೆ. ಕಾರಣ ನನ್ನ ತಂದೆ ಪ್ರತಿಬಾರಿಯೂ ತನ್ನನ್ನು ಕೆಳಗೆ ಬೀಳದಂತೆ ಹಿಡಿದುಕೊಳ್ಳುತ್ತಾನೆ ಎನುವ ಬಲವಾದ ನಂಬಿಕೆ.







ಮೂರನೇಯ ಕಥೆ :
ನಾವು ರಾತ್ರಿ ಮಲಗಿದಾಗ ಬೆಳಗ್ಗೆ ಏಳುವುದನ್ನು ಖಚಿತ ಪಡಿಸಲು ಸಾಧ್ಯವೇ ಇಲ್ಲ ಕಾರಣ ಭವಿಷ್ಯ ಕಾಲ ತುಂಬಾ ನಿಗೂಡ, ಅದನ್ನು ಆ ಭಗವಂತ ರಹಸ್ಯವಾಗಿಯೇ ಉಳಿಸಿದ್ದಾನೆ, ಆದರು ನಾವು ರಾತ್ರಿ ಮಲಗುವಾಗ ನಮ್ಮನ್ನು ಎಬ್ಬಿಸುವ ಕರೆ ಘಂಟೆಯನ್ನು ಗಡಿಯಾರದಲ್ಲಿ ಅಳವಡಿಸಿ ನಂತರ ಮಲಗುತ್ತೇವೆ, ಏಕೆಂದರೆ ನಮ್ಮ ಜೀವನ ಮತ್ತೆ ಪ್ರಾರಂಭಿಸಲು.





ಅರ್ಥ : ಭಕ್ತಿ, ರಕ್ಷಣೆ ಮತ್ತು ಶಿಸ್ತು ಈ ಮೂರು ಜೀವನದ ಅಂಶಗಳು ನಂಬಿಕೆಯ ಕಂಬದ ಆಧಾರದ ಮೇಲೆ ನಿಂತಿವೆ.


- ಇಂತಿ ನಿಮ್ಮ ಪ್ರೀತಿಯ ಗೆಳೆಯ.
ಮಂಜುನಾಥ ಗೌಡ.

Monday, 17 September 2012

ಈ ಬದುಕು ಹೀಗ್ಯಾಕೆ...???


ನಮಸ್ಕಾರ ಗೆಳೆಯರೇ. 

ಈ ಜೀವನ ಅನ್ನೋದು, ಕಳೆದು ಹೋದ ನೆನ್ನೆ ಮತ್ತು ಬರಬಹುದಾದ ನಾಳೆ ಎನ್ನುವುದರ ಸಂಘರ್ಷ...

      ನಾವು ಚಿಕ್ಕವರಾಗಿದ್ದಾಗ ನಾವು ನಮ್ಮ ತಂದೆ-ತಾಯಿಯರ ಬೆನ್ನಮೇಲೆ ಕೂತು ಜಾತ್ರೆ ನೋಡಿದ ನೆನಪು. ಆ ನೆನಪುಗಳು ನಮ್ಮ ಬಾಲ್ಯದ ಅಮೂಲ್ಯ ಮುತ್ತುಗಳು. ಜೇನಿನ ಹನಿ ಸಾಗರವಾಗಿ ಹರಿಯುವಂತಹ ನೆನಪುಗಳು, ಈಗ ಬತ್ತಿ ಬರಿದಾಗಿದೆ. ಆ ಸಾಗರದ ಅಲೆಗಳು ಈಗ ಮೌನವಾಗಿದೆ.

ಈಗ ಕಾಲ ಬದಲಾಗಿದೆ, ಜೀವನದ ಶೈಲಿ ಬದಲಾಗಿದೆ, ಪ್ರತಿದಿನ ಜೀವನದ ಮೂಲ್ಯ ಕಳೆದು ಹೋಗುತ್ತಿದೆ. ಸಂಭಂದಗಳ ನಡುವೆ ನಮ್ಮ ತಂದೆ-ತಾಯಿ ನಮ್ಮನ್ನು ಹೇಗೆ ಬೆಳೆಸಿದ್ದಾರೆ,,,, ಆದರೆ ನಾವು ಅವರನ್ನ ಹೇಗೆ ನಡೆಸಿ ಕೋಳ್ತಾ ಇದ್ದೇವೆ....??? ಅನ್ನೋ ಒಂದು ಸಣ್ಣ ಪಾಪಪ್ರಜ್ಞೆ ಕೂಡ ನಮ್ಮಲ್ಲಿ ಉಳಿದಿಲ್ಲ.

ತಂದೆ ಮುಖದಲ್ಲಿ ದೇವರನ್ನಾ ಮತ್ತು ತಾಯಿ ಪಾದದಲ್ಲಿ ಸ್ವರ್ಗ ಕಣೋ ಅಂತ ಕಾಲ ಅದು, ಆದರೆ ಈಗ ಜನ ಅದನ್ನ ಮರೆತು ಪ್ರತಿ ವಿಷಯವನ್ನು ಪ್ರಯೋಗದ ಮೂಲಕ ಅಳಿತಾರೆ, ತಂದೆ ತಾಯಿ ತಾವು "ಬೆವರು ಸುರಿಸಿ ಕಷ್ಟಪಟ್ಟು ಗಳಿಸಿದ ಹಣವನ್ನು ತಮ್ಮ ಮಕ್ಕಳ ಏಳಿಗೆಗೆ, ಸಂತೋಷಕ್ಕೆ ಖರ್ಚು ಮಾಡೊವಾಗ, ಅದೆ ಮಕ್ಳು ತನ್ನ ತಂದೆ ತಾಯಿಗೆ ವಯಸ್ಸಾದಾಗ ಅವರ ಸಂತೋಷಕ್ಕೆ ಯಾಕೆ ಖರ್ಚು ಮಾಡೊದಿಲ್ಲ....

ಒಬ್ಬ ಮಗ ತನ್ನ ಮೊದಲನೆ ಹೆಜ್ಜೆ ಇಡೊವಾ ತನ್ನ ತಂದೆ-ತಾಯಿ ಸಹಾಯ ಪಡಿಬೆಕಾದ್ರೆ, ತಂದೆ-ತಾಯಿ ತಮ್ಮ ಜೀವನದ ಕೊನೆ ಹೆಜ್ಜೆ ಇಡೊವಾಗ ಯಾಕೆ ನಿರ್ಲಕ್ಷ್ಯ ತೊರಿಸ್ತಾನೆ...

ಜೀವನವೆಂಬ ಸಾಗರದಲ್ಲಿ ಎಲ್ಲಾ ತಂದೆ-ತಾಯಂದಿರು ತಮ್ಮ ಮಕ್ಕಳನ್ನ ದಡ ಸೇರಿಸೊ ಹಂಬಲದಲ್ಲಿ  ತಾವೆ ಸಗರದ ತಳ ಸೇರಿರ್ತಾರೆ....


 - ಇಂತಿ ನಿಮ್ಮ ಪ್ರೀತಿಯ ಗೆಳೆಯ.
ಮಂಜುನಾಥ ಗೌಡ.

Thursday, 13 September 2012

ಈ ಪ್ರಪಂಚ ಇರೋದೇ ಹೀಗೆ.

ನಮಸ್ಕಾರ ಗೆಳೆಯರೇ.

ಯೋಗದಲ್ಲಿ ಅತಿ ಮುಖ್ಯವಾದುದು ಆರೋಗ್ಯ ಇದನ್ನು "ಸಿದ್ದ ಸಮಾದಿ ಯೋಗ" ಎಂದು ಕರೆಯುತ್ತಾರೆ, ಇದರ ಸಂಸ್ಥಾಪಕರು " ಶ್ರೀ ಋಷಿ ಪ್ರಭಾಕರ ಗುರೂಜಿ". ಇವರ ಅನುಯಾಯಿಗಳಾದ "ಶ್ರೀ ಸಂಪಂಗಿ ಗುರೂಜಿ " ಇವರು ಹೇಳಿದ ಕಥೆ " ಈ ಪ್ರಪಂಚ ಇರೋದೇ ಹೀಗೆ".

ಒಂದು ದಿನ ಒಬ್ಬ ಮೀನುಗಾರ ಮೀನು ಹಿಡಿಯಲು ನದಿಗೆ ಹೋಗಿ ನದಿಯಲ್ಲಿ ತಾನು ತಂದಿದ್ದ ಬಲೆಯನ್ನು ಹರಡಿ ಮತ್ತೆ ಮನೆಗೆ ವಾಪಸ್ಸಾದ, ಕೆಲವೇ ಸಮಯದ ನಂತರ ಆ ಬಲೆಯಲ್ಲಿ ಒಂದು ಮೊಸಳೆ ಸಿಕ್ಕಿ ಹಾಕಿಕೊಂಡಿತು. ತಾನು ಹೊರ ಬರಲಾರದೆ
ಜೋರಾಗಿ ಕೂಗಿಕೊಳ್ಳುತಿತ್ತು. ಅದೇ ದಾರಿಯಲ್ಲಿ ಹೋಗುತಿದ್ದ ಒಬ್ಬ ಹುಡುಗ ಆ ಕೂಗನ್ನು ಕೇಳಿಸಿಕೊಂಡ ಅವನು ನದಿ ದಡಕ್ಕೆ ದಾವಿಸಿದ. ಆ ಹುಡುಗನನ್ನು ಕಂಡ ಮೊಸಳೆ ತನ್ನನು ಕಾಪಾಡು ಎಂದು ಕಣ್ಣೀರಿಡುತ್ತಾ ಬೇಡಿಕೊಂಡಿತು, ಅದರ ಕಣ್ಣೀರಿಗೆ ಮರುಗಿದ ಹುಡುಗ ಅದನ್ನು ಬಿಡಿಸಿದ. ಮೊಸಳೆ ಆ ಹುಡುಗನಿಗೆ ಧನ್ಯವಾದ ಹೇಳಿ ಅವನ ಕೈಯನ್ನು ಹಿಡಿದುಕೊಂಡು ನನಗೆ ತುಂಬಾ ಹಸಿವಾಗಿದೆ, ಅದ್ದರಿಂದ ನಿನ್ನನು ತಿನ್ನುತ್ತೇನೆ ಎಂದು ಹೇಳಿತು. ಆ ಮೊಸಳೆಯ ಮಾತಿಗೆ ಹೆದರಿದ ಹುಡುಗ ನೀನು ಮಾಡುವುದು ತಪ್ಪು. ನನ್ನನ್ನು ಬಿಟ್ಟು ಬಿಡು ನಾನು ನನ್ನ ತಾಯಿಯ ಬಳಿಗೆ ಹೋಗಬೇಕು ಎಂದು ಕೇಳಿಕೊಂಡರು ಅದು ಬಿಡದೆ ಹಠಮಾಡಿತು ಕೊನೆಗೆ, ಆ ಹುಡುಗ ಉಪಾಯ ಮಾಡಿ ಸರಿ ಹಾಗಾದರೆ ಹೀಗೆ ಮಾಡೋಣ ಮೊದಲು ನಾವು ಮೂರು ಜನರಲ್ಲಿ ನ್ಯಾಯ ಕೇಳೋಣ ಅವರ ತೀರ್ಪಿನಂತೆ ನಡೆದುಕೊಳ್ಳೋಣ ಎಂದು, ಇದಕ್ಕೆ ಮೊಸಳೆ ಒಪ್ಪಿ ಕೊಂದಿತು.

ಮೊದಲು ಒಂದು ತೋಳದ ಬಳಿಗೆ ಬಂದು ನಡೆದುದ್ದನೆಲ್ಲ ವಿವರಿಸಿ ಹೇಳಿದಾಗ, ಆ ತೋಳ  ಮೊಸಳೆಯ ಪರವಾಗಿ ತೀರ್ಪನ್ನು ನೀಡಿ ಹೀಗೆ ಹೇಳಿತು ಮೊಸಳೆ ಮಾಂಸಹಾರಿ ಅದು ನಿನ್ನನ್ನು ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು.

ಎರಡನೆಯದಾಗಿ ಒಂದು ಸಿಂಹದ ಬಳಿದೆ ಹೋಗಿ ನಡೆದುದ್ದನೆಲ್ಲ ಹೇಳಿ, ತನಗೆ ನ್ಯಾಯ ಕೊಡಿ ಎಂದು ಆ ಹುಡುಗ ಅಂಗಲಾಚಿ ಬೇಡಿಕೊಂಡ, ಆದರೆ ಅ ಸಿಂಹ ಕೂಡ ಅವನಿಗೆ ವಿರುದ್ದವಾಗಿ ತೀರ್ಪನ್ನು ನೀಡಿ ಹೀಗೆ ಹೇಳಿತು, ಬಳಶಾಲಿಗಳಿಗೆ ಈ ಪ್ರಕೃತಿಯ ಪ್ರತಿಯೊಂದು ವಸ್ತುವಿನಮೇಲೆ ಅದಿಕಾರವಿದೆ ಎಂದು.

ಮೂರನೆಯದಾಗಿ ಒಂದು ಮೊಲದ ಬಳಿ ಬಂದು ನಡೆದುದ್ದನೆಲ್ಲ ವಿವರಿಸಿ ನ್ಯಾಯ ಕೇಳಿದಾಗ, ಆ ಮೊಲ ಮೊಸಳೆ ಮತ್ತು ಹುಡುಗನನ್ನು ಕುರಿತು ಹೀಗೆ ಹೇಳಿತು ನನಗೆ ಕಿವಿ ಸ್ವಲ್ಪ ಮಂದವಾಗಿದೆ ಆದ್ದರಿಂದ ನೀವು ನನಗೆ ಪ್ರಾಯೋಗಿಕವಾಗಿ ತೋರಿಸಿ ಆಗ ಮಾತ್ರ ನಾನು ತೀರ್ಪನ್ನು ಕೊಡಲು ಸಾಧ್ಯ ಎಂದಿದು, ಅದರಂತೆ ಮೂರು ಜನ ನದಿ ದಡಕ್ಕೆ ಬಂದರು ಮೊಸಳೆ ಮತ್ತೆ ನೀರಿಗೆ ಇಳಿಯಿತು, ಆ ಹುಡುಗ ಬಲೆಯನ್ನು ಹಾಕಿ ಮೂಲ ಸ್ಥಿತಿಗೆ ತಂದು ಮೊಸಳೆಯನ್ನು ಬಲೆಯಲ್ಲಿ ಸಿಕ್ಕಿಸಿದ. ಮೊಸಳೆಯನ್ನು ಬಲೆಯಿಂದ
ಬಿಡಿಸಬೇಡ ಎಂದು ಮೊಲ ಆ ಹುಡುಗನಿಗೆ ಹೇಳಿ, ನೋಡು ಮಗು ಈ ಪ್ರಪಂಚ ಇರೋದೇ ಹೀಗೆ. ಅದಕ್ಕೆ ನಾವು ದುಷ್ಟರನ್ನು ಕಂಡರೆ ದೂರ ಇರಬೇಕು ಅಂತ ಹೇಳೋದು, ಇನ್ನು ನಿನ್ನ ದಾರಿ ನೀನು ಹಿಡಿ, ನಾನು ದಾರಿಗೆ ನಾನು ಹೋಗುತ್ತೇನೆ ಎಂದು ನದಿ ದಡವನ್ನು ತೋರೆದವು.

    "ಯಾರಾದರು ಅಪಾಯದಲ್ಲಿದರೆ ಕಾಪಾಡುವ ಮುನ್ನ ಒಮ್ಮೆ ಆಲೋಚಿಸಿ ಮುಂದುವರೆಯಿರಿ"

 
 - ಇಂತಿ ನಿಮ್ಮ ಪ್ರೀತಿಯ ಗೆಳೆಯ
ಮಂಜುನಾಥ ಗೌಡ.





Wednesday, 12 September 2012

ಸೀತಜ್ಜಯ್ಯನ ಮನದಾಳದ ಮಾತು.

ನಮಸ್ಕಾರ ಗೆಳೆಯರೇ, 

ಯಾವುದೋ ಒಂದು ಚಲನಚಿತ್ರದ ಸಂಭಾಷಣೆ ಹೀಗಿದೆ "Life is start with the Competation" ಯಾಕೋ ಗೊತ್ತಿಲ್ಲ, ಈ ಸಾಲು ನನ್ನ ಮನಸ್ಸನ್ನು ತುಂಬಾ ಯೋಚನೆಗೆ ದಾರಿ ಮಾಡಿತ್ತು, ಆದರೆ ಈ ಇಂತಹ ಪ್ರಶ್ನೆಗೆ ಉತ್ತರ ನನಗೆ ಸಿಕ್ಕಿದು, ೯೦ರ ಆಸು-ಪಾಸಿನ ಓರ್ವ ಅಜ್ಜನಿಂದ. 

                 ಅವರ ವಿವರಣೆ ಬಹಳ ಸರಳವಾಗಿತ್ತು. "ನಮ್ಮ ಜನನದ ಮುನ್ನ ಮರಣದ ನಿರ್ಣಯವಾಗಿರುತ್ತದೆ" ನಾವು ಅಂದುಕೊಳ್ಳೋದು ಜೀವಿಸುವ ಸಲುವಾಗಿ ಪ್ರತಿನಿತ್ಯ ಹೋರಾಟ ಮಾಡುತ್ತೀವಿ ಅಂತ, ಆದರೆ ನಾವು ಪ್ರತಿನಿತ್ಯ ಸಾವಿಗೆ ಹತ್ತಿರವಾಗುತ್ತಿದ್ದೇವೆ, 

ಗರ್ಭಾವಸ್ಥೆಯಲ್ಲಿ - ಅಂಡಾಣುಗಳ ವಿರುದ್ದ ಹೋರಾಟ. 
ವಿಧ್ಯಾಭ್ಯಾಸದಲ್ಲಿ - ಪರೀಕ್ಷೆಗಳ ವಿರುದ್ದ ಹೋರಾಟ. 
ಕೆಲಸಕ್ಕಾಗಿ - ಅವಕಾಶಗಳಿಗಾಗಿ ಹೋರಾಟ. 
ಜೀವನಕಾಗಿ - ದಿನನಿತ್ಯ ಅಗತ್ಯಗಳಿಗಾಗಿ ಹೋರಾಟ. 
ಮುಪ್ಪಿನಲ್ಲಿ - ಅನಾರೋಗ್ಯದ ವಿರುದ್ದ ಹೋರಾಟ. 
ಹೀಗೆ ಜನನದಿಂದ ಮರಣದವರೆಗೆ ಹೋರಾಟದ ಹಾದಿಯಲ್ಲಿ ನಡೆಯುವ ನಾವು ಏನನ್ನು ಸಾಧಿಸದೆ ಚಿಂತಿಸುತ್ತೇವೆ. 

      ಅಜ್ಜ ಹೇಳಿದ ಒಂದೊಳ್ಳೆ ಮಾತು : ಯಾಕ್ರಯ್ಯ ನೀವು ಬೆಂಗಳೂರಿನವರು ೬೦ರ ನಂತರ "ನನಗೆ ನೆಮ್ಮದಿ ಮತ್ತು ಆರೋಗ್ಯ ಬೇಕು" ಅಂತ ಯೋಚನೆ ಮಾಡ್ತಿರಾ? " ನನಗೆ ಅನ್ನೋ ಅಹಂ, ಬೇಕು ಅನ್ನೋ ದುರಾಸೆ" ಈ ಎರಡನ್ನು ಮೊದಲು ಬಿಡಿ, ನಿಮಗೆ "ನೆಮ್ಮದಿ ಮತ್ತು ಆರೋಗ್ಯ" ಎರಡು ಸಿಗುತ್ತೆ. ಅಂತರಿಕ ಮತ್ತು ಶಾರೀರಿಕ ಎರಡನ್ನು ಚೆನ್ನಾಗಿ ನೋಡ್ಕೋಬೇಕು. 

ಅಜ್ಜ ನೀವು ಎಲ್ಲಿವರೆಗೂ ಓದಿದ್ದೀರ ಅಂತ ಕೇಳಿದಕ್ಕೆ ಹೇಳಿದ್ದು ನನ್ನ ಅಪ್ಪನ ಅಪ್ಪ ನನಗೆ ಕಲಿಸಿರುವ ತನಕ ನಾನು ಓದಿದ್ದೇನೆ ಅಂತ ಹೇಳಿದರು, ಆದರೆ ಅದು ನನಗೆ ಸರಿಯಾಗಿ ಅರ್ಥವಾಗಲಿಲ್ಲ ಇದನ್ನು ಅರಿತ ಅಜ್ಜ, ನನಗೆ ಹೀಗೆ ಬಿಡಿಸಿ ಹೇಳಿದ್ರು. 

ನೀತಿ ಕಲಿತದ್ದು - ನೀತಿ ಕಥೆಗಳಿಂದ, 
ಜೀವನ ಕಲಿತದ್ದು - ಅಜ್ಜನಿಂದ. 
ಧರ್ಮ ಕಲಿತದ್ದು - ಅಜ್ಜಿಯಿಂದ 
ಕೆಲಸ ಕಲಿತದ್ದು - ಅಪ್ಪನಿಂದ 
ತಾಳ್ಮೆ ಕಲಿತದ್ದು - ಅಮ್ಮನಿಂದ. 
ಸಂಸ್ಕೃತಿ ಕಲಿತದ್ದು - ಹಕ್ಕಿಗಳಿಂದ. 
ನಿಯತ್ತು ಕಲಿತದ್ದು - ಪ್ರಾಣಿಗಳಿಂದ. 
ಕೂಡಿ ಬಾಳಿದ್ದು - ಗೆಳೆಯರಿಂದ. 

ನೋಡು ಮಗ ಕಲಿಬೇಕು ಅನ್ನೋನು, ಕಲ್ಲಿಂದ ಕೂಡ ಪಾಠ ಕಲಿತಾನೆ ಅದನ್ನ ಯಾರು ಹೇಳೋ ಅಗತ್ಯ ಇಲ್ಲ, ಆದ್ರೆ ಕಲಿಯೋಕೆ ಇಷ್ಟ ಇಲ್ದೆ ಇರೋರನ್ನ ಬೃಹಸ್ಪತಿ ಕಲಿಸೋಕೆ ಪ್ರಯತ್ನ ಪಟ್ರು ಆಗೋಲ್ಲ. 
ಜೀವನ ಕಲಿ - ನಿನ್ನ ವೃತ್ತಿ ಧರ್ಮ ಪಾಲಿಸು, 
ನೋಯಿಸಬೇಡ - ನೆಮ್ಮದಿಯಾಗಿರು, 
ಕಷ್ಟ ಬರಲಿ - ತಂದೆ ತಾಯಿನ ಕಾಪಾಡು, 
ವಿವೇಕ ಬೆಳೆಸ್ಕೋ - ಮಾನವೀಯತೆ ಕಾಪಾಡು, 
ಹೃದಯವಂತಿಕೆ ಇರಲಿ - ಸತ್ತಮೇಲೆ ದೇಹನ ದಾನಮಾಡು. 

ಜೀವ ಇರೋವಾಗ ಯಾರಿಗೆ ಉಪಯೋಗ ಅಗ್ತಿವೋ ಯಾರಿಗೂ ಗೊತ್ತಿಲ್ಲ, ಆದ್ರೆ ಸತ್ಮೇಲೆ ಮಾತ್ರ ಪ್ರತಿಯೊಬ್ಬರೂ ಉಪಯೋಗಕ್ಕೆ ಬರ್ತಿವಿ ಅದು ನಮ್ಮ ದೇಹವನ್ನು ದಾನಮಾಡಿದಾಗ. 

 - ಇಂತಿ ನಿಮ್ಮ ಪ್ರೀತಿಯ ಗೆಳೆಯ. 
ಮಂಜುನಾಥ ಗೌಡ.